ಪವಾಡಸದೃಶ ಪಯಣ:ವಿಮಾನದ ಚಕ್ರದ ಭಾಗದಲ್ಲಿ ಕುಳಿತು ಕಾಬೂಲ್‌ನಿಂದ ದೆಹಲಿಗೆ ಬಂದ 13 ವರ್ಷದ ಬಾಲಕ

 

Pavada
ದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ದೆಹಲಿಗೆ ಬಂದ ವಿಮಾನದಲ್ಲಿ 13 ವರ್ಷದ ಬಾಲಕನೊಬ್ಬ ಜೀವಕ್ಕೆ ಅಪಾಯ ಒಡ್ಡಿ, 94 ನಿಮಿಷಗಳ ಪ್ರಯಾಣದ ನಂತರ ಬದುಕುಳಿದಿರುವ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಪವಾಡಸದೃಶ ಘಟನೆ ವಿಮಾನಯಾನ ಮತ್ತು ಭದ್ರತಾ ತಜ್ಞರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹಿಂಬದಿ ಚಕ್ರದಲ್ಲಿ ಪ್ರಯಾಣ

ಇರಾನ್‌ಗೆ ತೆರಳಲು ಯತ್ನಿಸುತ್ತಿದ್ದ ಈ ಬಾಲಕ ತಪ್ಪಾಗಿ ಕೆಎಎಂ ಏರ್ ಸಂಸ್ಥೆಯ ಏರ್‌ಬಸ್ A340 ವಿಮಾನದ ಚಕ್ರದ ಭಾಗದಲ್ಲಿ ಅಡಗಿಕೊಂಡು ಪ್ರಯಾಣಿಸಿದ್ದಾನೆ. ವಿಮಾನ ಬೆಳಗ್ಗೆ 8.46ಕ್ಕೆ ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, 10.20ಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ವಿಮಾನ ನಿಲ್ಲುತ್ತಿದ್ದಂತೆ ಬಾಲಕ ನಿರ್ಬಂಧಿತ ವಲಯದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಕೂಡಲೇ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ಎಚ್ಚರಗೊಂಡಿದ್ದಾರೆ.

ವಾಯುಯಾನ ತಜ್ಞರ ಅಭಿಪ್ರಾಯ

ಸಾಮಾನ್ಯವಾಗಿ ವಿಮಾನದ ಚಕ್ರದ ಹಿಂಭಾಗ ಆಮ್ಲಜನಕದ ಕೊರತೆ, ತೀವ್ರ ಚಳಿ ಮತ್ತು ಶಾರೀರಿಕ ಆಘಾತದಿಂದ ಅತ್ಯಂತ ಅಪಾಯಕಾರಿ ಪ್ರದೇಶವಾಗಿರುತ್ತದೆ. ಆದರೂ ಬಾಲಕ ಬದುಕುಳಿದಿರುವುದು ನಿಜಕ್ಕೂ ಪವಾಡ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಯುಯಾನ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್, ವಿಮಾನದ ಚಕ್ರದ ಭಾಗದಲ್ಲಿ ಒತ್ತಡ ನಿಯಂತ್ರಿತ ಜಾಗವಿದ್ದರೆ ಬಾಲಕ ಬದುಕುಳಿಯಲು ಸಾಧ್ಯ ಎಂದು ಹೇಳಿದ್ದಾರೆ. ವಿಮಾನ ಟೇಕ್‌ಆಫ್ ಆದ ನಂತರ ಚಕ್ರದ ಬಾಗಿಲು ಮುಚ್ಚಿದರೆ, ಒಳಗೆ ತಾಪಮಾನವು ಪ್ರಯಾಣಿಕರ ಕ್ಯಾಬಿನ್‌ಗೆ ಹತ್ತಿರವಾಗಿರಬಹುದು. ಆದರೆ ಇಂತಹ ಸಾಹಸಗಳು ಸಾಮಾನ್ಯವಾಗಿ ದುರಂತದಲ್ಲಿ ಅಂತ್ಯಗೊಳ್ಳುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments