ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿ: ಶಕ್ತಿ, ಅನ್ನಭಾಗ್ಯಕ್ಕೆ ಅಗ್ರಸ್ಥಾನ, ಲೋಕನೀತಿ-CSDS ಸಮೀಕ್ಷಾ ವರದಿ

 

Ad
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿತ್ವವನ್ನು ಕುರಿತು ಲೋಕನೀತಿ ಮತ್ತು ಸಿ.ಎಸ್.ಡಿಎಸ್ ಸಂಸ್ಥೆಗಳು ನಡೆಸಿದ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ವರದಿಯು ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿರುವುದನ್ನು ದೃಢಪಡಿಸಿದೆ.

Ad

 ಶಕ್ತಿ ಯೋಜನೆ: ಅತ್ಯಂತ ಯಶಸ್ವಿ ಯೋಜನೆಯಾಗಿದ್ದು, ಶೇ. 96% ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭ ಪಡೆದಿದ್ದಾರೆ.

 ಅನ್ನಭಾಗ್ಯ ಯೋಜನೆ: ಶೇ. 94% ಬಿಪಿಎಲ್ ಕುಟುಂಬಗಳನ್ನು ತಲುಪಿದೆ. ಇದರಿಂದ ಶೇ. 64% ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ವರದಿ ಹೇಳಿದೆ.

 ಗೃಹಜ್ಯೋತಿ: ಶೇ. 82% ಮನೆಗಳಿಗೆ ತಲುಪಿದ್ದು, ಶೇ. 74% ಕುಟುಂಬಗಳು ತಿಂಗಳಿಗೆ ₹ 500 ವರೆಗೆ ಉಳಿತಾಯ ಮಾಡುತ್ತಿವೆ.

ಗೃಹಲಕ್ಷ್ಮಿ: ಶೇ. 78% ಮಹಿಳೆಯರು ಪ್ರಯೋಜನ ಪಡೆದಿದ್ದು, ಶೇ. 88% ಮಹಿಳೆಯರು ಮನೆಯ ನಿರ್ಧಾರಗಳಲ್ಲಿ ಭಾಗವಹಿಸುವಷ್ಟು ಆತ್ಮವಿಶ್ವಾಸ ಗಳಿಸಿದ್ದಾರೆ.

 ಯುವನಿಧಿ ಯೋಜನೆ: ಇದರ ವ್ಯಾಪ್ತಿ ಅತ್ಯಲ್ಪ (ಕೇವಲ ಶೇ. 7%) ಆಗಿದ್ದರೂ, ಲಾಭ ಪಡೆದವರಲ್ಲಿ ಶೇ. 51% ಮಂದಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಲ್ಲಿ ಸೇರಿಕೊಂಡಿರುವುದು ಗಮನಾರ್ಹ.

ಮಹಿಳಾ ಸಬಲೀಕರಣಕ್ಕೆ ನೈಜ ದಿಕ್ಕು: ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಫಲಾನುಭವಿಗಳಲ್ಲಿ ಶೇ. 70–75% ರಷ್ಟು ಮಹಿಳೆಯರಿದ್ದು, ಈ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ನೈಜ ದಿಕ್ಕನ್ನು ತೋರಿಸುತ್ತಿವೆ ಎಂದು ವರದಿ ಸ್ಪಷ್ಟಪಡಿಸಿದೆ.

ಉತ್ತರ ಕರ್ನಾಟಕ ಮುಂಚೂಣಿ: ಜಿಲ್ಲಾವಾರು ಫಲಾನುಭವಿಗಳ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಬಹುಪಾಲು ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಆದರೆ, ಕರಾವಳಿ ಭಾಗದಲ್ಲಿ ಜಾಗೃತಿ ಹೆಚ್ಚಿದ್ದರೂ, ನಿಯಮಿತ ಬಳಕೆ ಕಡಿಮೆ ಇದೆ.


ಜಾಹೀರಾತಿಗಾಗಿ  ಸಂಪರ್ಕಿಸಿ:

ನಮ್ಮ  ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments