ಬಂಟ್ವಾಳ: ಸುಮಾರು 34 ತೆಂಗಿನ ಕಾಯಿ ಕಳ್ಳತನ – ಇಬ್ಬರ ವಿರುದ್ಧ ಪ್ರಕರಣ

                                    - ai ಸಾಂದರ್ಭಿಕ ಚಿತ್ರ-

ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ನಿವಾಸಿ ಜೀವನ್ ಆಳ್ವ (53) ರವರ ತೋಟದಲ್ಲಿ ತೆಂಗಿನಕಾಯಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.

Ad


ಸೆಪ್ಟೆಂಬರ್ 25ರಂದು ರಾತ್ರಿ ಬಂಟ್ವಾಳ ತುಂಬೆಯಲ್ಲಿರುವ ತಾಯಿಯ ತೋಟದಿಂದ ಇಬ್ಬರು ಅಪರಿಚಿತರು ಸುಮಾರು 34 ತೆಂಗಿನಕಾಯಿಗಳನ್ನು (₹1000 ಮೌಲ್ಯ) ಕದ್ದುಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯರು ಅವರನ್ನು ಪತ್ತೆಹಚ್ಚಿ ತಕ್ಷಣ ಜೀವನ್ ಆಳ್ವರವರಿಗೆ ಮಾಹಿತಿ ನೀಡಿದ್ದಾರೆ.

Ad


ಸ್ಥಳಕ್ಕೆ ಧಾವಿಸಿದ ಜೀವನ್ ಆಳ್ವ ಅವರು ಕಳ್ಳರು ತೆಂಗಿನಕಾಯಿಗಳನ್ನು ಚೀಲದಲ್ಲಿ ತುಂಬಿಸಿರುವುದನ್ನು ದೃಢಪಡಿಸಿದ್ದಾರೆ.

ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 145/2025, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp


Post a Comment

0 Comments