ಬಿಳಿನೆಲೆಯಲ್ಲಿ (ಅ.11 ರಿಂದ ಅ.12) ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮತ್ತು ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರ

 


Ad

ಬಿಳಿನೆಲೆ ಗ್ರಾಮದ ಜನತೆಗೆ ಆಧಾರ್ ಸಂಬಂಧಿತ ಸೇವೆಗಳನ್ನು ಮತ್ತು ವಿಮಾ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ, ಯುವಕ ಮಂಡಲ (ರಿ.) ಬಿಳಿನೆಲೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗವು ಸುಬ್ರಹ್ಮಣ್ಯ ಅಂಚೆ ಕಚೇರಿಯ ಸಹಯೋಗದೊಂದಿಗೆ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮತ್ತು ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರವನ್ನು ಆಯೋಜಿಸಿದ್ದಾರೆ.

Ad


ದಿನಾಂಕ 11-10-2025 ರಿಂದ 12-10-2025ರವರೆಗೆ ಶ್ರೀ ಗೋಪಾಲ ಕೃಷ್ಣ ಭವನ ಬಿಳಿನೆಲೆ ಇಲ್ಲಿ ಶಿಬಿರವು ನಡೆಯಲಿದೆ. ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ ಸೇವೆಗಳು ಲಭ್ಯವಿರಲಿದೆ.

ಶಿಬಿರದಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳು:

 * ಹೊಸ ಆಧಾರ್ ನೋಂದಣಿ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೊಸ ಆಧಾರ್ ನೋಂದಣಿ ಲಭ್ಯ 

ಬೇಕಾಗುವ ದಾಖಲೆಗಳು:

* ಜನನ ಪ್ರಮಾಣ ಪತ್ರ 

* ಪೋಷಕರ ಆಧಾರ್ ಕಾರ್ಡ್ 

* ಮಗುವಿನ ಜೊತೆಗೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು.

 ಹೆಸರು ತಿದ್ದುಪಡಿಗೆ ಬೇಕಾಗುವ ದಾಖಲೆಗಳು:

 * ಪಾನ್ ಕಾರ್ಡ್

 * ಪಾಸ್ಪೋರ್ಟ್ 

* ವೋಟರ್ ಐಡಿ 

* ರೇಷನ್ ಕಾರ್ಡ್ 

* ಡ್ರೈವಿಂಗ್ ಲೈಸೆನ್ಸ್ 

* ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ 

* ಜನನ ಪ್ರಮಾಣ ಪತ್ರ ( only for minors )

 ಜನ್ಮ ದಿನಾಂಕ ತಿದ್ದುಪಡಿಗೆ ಬೇಕಾಗುವ ದಾಖಲೆಗಳು:

* ಪಾಸ್ ಪೋರ್ಟ್ 

* ಜನನ ಪ್ರಮಾಣ ಪತ್ರ 

ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ 

 ಪಿಂಚಣಿ ಪಾವತಿಯ ಆದೇಶದ ಮೂಲ ಪ್ರತಿ 

 ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ 

 ವಿಳಾಸ ಬದಲಾವಣೆಗೆ ಬೇಕಾಗುವ ದಾಖಲೆಗಳು:

* ವೋಟರ್ ಐಡಿ 

* ಪಾಸ್ಪೋರ್ಟ್ 

* ರೇಷನ್ ಕಾರ್ಡ್ 

 * ಬ್ಯಾಂಕ್ ಪಾಸ್ ಬುಕ್ (ಬ್ಯಾಂಕ್ ಸೀಲ್ + ಫೋಟೋ)

* ವಾಸ್ತವ್ಯ ದೃಢೀಕರಣ ಪತ್ರ  

ಸೇವೆಗಳನ್ನು ಪಡೆಯಲು ಬರುವವರು ಎಲ್ಲಾ ದಾಖಲೆಗಳ ಮೂಲ ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ. 

* ಇ-ಮೇಲ್ ತಿದ್ದುಪಡಿ

* ಲಿಂಗ ಬದಲಾವಣೆ 

* ಮೊಬೈಲ್ ಸಂಖ್ಯೆ ತಿದ್ದುಪಡಿ 

* ಬಯೋಮೆಟ್ರಿಕ್ ಅಪ್ಡೇಟ್ 

* ಫೋಟೋ ಫಿಂಗರ್ ಪ್ರಿಂಟ್ 

 ಈ ಮೇಲಿರುವ ಆಧಾರ್ ತಿದ್ದುಪಡಿಗಳಿಗೆ ಯಾವುದೇ ದಾಖಲೆಗಳು ಅಗತ್ಯವಿಲ್ಲ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp



Post a Comment

0 Comments