ಅಡ್ಡಬೈಲು ಶ್ರೀ ಕೃಷ್ಣ ಭಜನಾ ಮಂಡಳಿ (ರಿ.) ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು 31-08-2025, ಭಾನುವಾರದಂದು ಅಡ್ಡಬೈಲಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ
ಮಕ್ಕಳಿಗೆ :
ಅಂಗನವಾಡಿ LKG, UKG ಮಕ್ಕಳಿಗೆ :
ಕಪ್ಪೆಜಿಗಿತ, ಬಕೆಟಿಗೆ ಚೆಂಡು ಹಾಕುವುದು, ಬಾಟಲಿಗೆ ನೀರು ತುಂಬಿಸುವುದು, ಕೆರೆದಡ
1 ರಿಂದ 3, 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ : ಚಿತ್ರ ಬಿಡಿಸುವುದು, ಕೆರೆ-ದಡ, ಸಂಗೀತ ಕುರ್ಚಿ, ಬಲೂನ್ ಒಡೆಯುವುದು.
8 ರಿಂದ PUC ವಿದ್ಯಾರ್ಥಿಗಳಿಗೆ (ಹುಡುಗ-ಹುಡುಗಿ ಪ್ರತ್ಯೇಕ) :
ಸಂಗೀತ ಕುರ್ಚಿ, ಭಕ್ತಿಗೀತೆ, ಬಲೂನ್ ಒಡೆಯುವುದು
1 ರಿಂದ 5 ವರ್ಷದ ಒಳಗಿನ ಪುಟಾಣಿಗಳಿಗೆ : ಕೃಷ್ಣವೇಷ ಸ್ಪರ್ಧೆ
ಪುರುಷರಿಗೆ :
ಮೊಸರು ಕುಡಿಕೆ
ಹಗ್ಗಜಗ್ಗಾಟ
ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಜನರ ಮಟ್ಟದ, ಲೆವೆಲ್ ಮಾದರಿಯ 555 ಕೆಜಿ. ವಿಭಾಗ ಪ್ರಥಮ ಬಹುಮಾನ-ರೂ. 3,000/-, ಶಾಶ್ವತ ಫಲಕ
(ಕೊಡುಗೆ: ಶ್ರೀ ಛತ್ರ ಕುಮಾರ್ ಪಲ್ಲಡ್ಕ)
ದ್ವಿತೀಯ ಬಹುಮಾನ-ರೂ. 2,000/-, ಶಾಶ್ವತ ಫಲಕ
(ಕೊಡುಗೆ: ಶ್ರೀ ಹುಕ್ರಪ್ಪ ಗೌಡ ಅಗೋಳಿಬೈಲು)
ಮಹಿಳೆಯರಿಗೆ :
ಸಂಗೀತ ಕುರ್ಚಿ, ಮೊಸರು ಕುಡಿಕೆ
ಹಗ್ಗಜಗ್ಗಾಟ (ಮುಕ್ತ 7 ಜನರ)
ಪ್ರಥಮ ಬಹುಮಾನ-ರೂ. 2,000/-, ಶಾಶ್ವತ ಫಲಕ (ಕೊಡುಗೆ: ಶ್ರೀ ತೇಜ ಕುಮಾರ್ ಪಲ್ಲತ್ತಡ್ಕ ಎಎಸ್ಐ ಸಿಸಿಬಿ ಮಂಗಳೂರು)
ದ್ವಿತೀಯ ಬಹುಮಾನ ರೂ. 1,000/-, ಶಾಶ್ವತ ಫಲಕ
(ಕೊಡುಗೆ: ಶ್ರೀ ವಿವೇಕ್ ಆಗೋಳಿಬೈಲು)
ಎಲ್ಲಾ ಸ್ಪರ್ಧೆಗಳಿಗೂ 9.00 ಗಂಟೆಯ ಒಳಗಡೆ ಹೆಸರು ನೋಂದಾಯಿಸತಕ್ಕದ್ದು.
ನಿರ್ಣಾಯಕರ ತೀರ್ಮಾನವೇ ಅಂತಿಮ. ಹೆಚ್ಚಿನ ಮಾಹಿತಿಗಾಗಿ : 8861260214,8105975617
ಭಕ್ತರು, ಗ್ರಾಮಸ್ಥರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

0 Comments