ಆಗಸ್ಟ್ 16ರಿಂದ 18ರವರೆಗೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕಳಂಜ ಗ್ರಾಮದ ಕು. ಭವಿತಾ ಬೇರಿಕೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಕು. ಭವಿತಾ ಬೇರಿಕೆ ಅವರು ಕಳಂಜ ಗ್ರಾಮದ ಶ್ರೀಮತಿ ದಮಯಂತಿ ಹಾಗೂ ಲಕ್ಷ್ಮಣ ಗೌಡ ಇವರ ಪುತ್ರಿ.
ಪ್ರಾಥಮಿಕ ಶಿಕ್ಷಣವನ್ನು ತಂಟೆಪ್ಪಾಡಿಮತ್ತು,ಕೋಟೆ ಮುಂಡುಗರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ,ಹೈಸ್ಕೂಲ್ ವಿದ್ಯಾಭ್ಯಾಸವನ್ನುವಿದ್ಯಾಬೋಧಿನಿ ಹೈ ಸ್ಕೂಲ್ ಬಾಳಿಲ, ಪದವಿಪೂರ್ವ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.ಪದವಿ ಶಿಕ್ಷಣವನ್ನು ಕೊಡಿಯಾಲ್ಬೈಲ್ ಸುಳ್ಯ ಪಡೆದಿರುತ್ತಾರೆ.


0 Comments