ನವರಾತ್ರಿ ಆರನೇ ದಿನದ ಆರಾಧನೆ – ಮಾ ಕಾತ್ಯಾಯನಿ ಕಥೆ,ಪೂಜೆಯ ಮಹತ್ವ

Navarathri

 ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಕಾತ್ಯಾಯನಿಯೂ ಒಬ್ಬಳು. ನವರಾತ್ರಿ ಆರನೇ ದಿನ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹೊಂದಿರುವ ಕಾತ್ಯಾಯನಿಯನ್ನು ಭಕ್ತಿಯಿಂದ ಇಂದು (ಸೆ. 27) ಪೂಜಿಸಲಾಗುತ್ತದೆ. ಕಾತ್ಯಾಯನಿ ಮಾತೆಯ ಪುರಾಣ, ಪೂಜೆ ವಿಧಿ ಮತ್ತು ಮಂತ್ರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.


ಪೂಜಾ ವಿಧಿ

ಕಾತ್ಯಾಯನಿ ಮಾತೆಯ ಆರಾಧನೆಯ ಆರನೇ ದಿದಂದು ಭಕ್ತರು ಬೇಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಬೇಕು. ಆಚರಣೆಯನ್ನು ಮಾಡುವ ಮೊದಲು ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಮಾ ಕಾತ್ಯಾಯನಿಗೆ ತಾಜಾ ಹೂವುಗಳನ್ನು ವಿಶೇಷವಾಗಿ ಕಮಲ ಅರ್ಪಿಸುವುದು ಒಳ್ಳೆಯ ಶಕುನ ಎಂದು ಪರಿಗಣಿಸಲಾಗುತ್ತದೆ. ಭಕ್ತರು ನಂತರ ಮಂತ್ರಗಳನ್ನು ಪಠಿಸಬಹುದು ಮತ್ತು ಆಚರಣೆಯನ್ನು ಪೂರ್ಣಗೊಳಿಸಲು ಪ್ರಾರ್ಥನೆಗಳನ್ನು ಓದಬಹುದು.




ಕಾತ್ಯಾಯನಿ ಪೂಜೆಯ ಮಹತ್ವ

ನವರಾತ್ರಿಯ ಆರನೇ ದಿನದಂದು ವೈವಾಹಿಕ ಸಂಕಟಗಳನ್ನು ಪರಿಹರಿಸಲು ಭಕ್ತರು ಮಾ ಕಾತ್ಯಾಯನಿಯನ್ನು ಪೂಜಿಸುತ್ತಾರೆ. ಅವಿವಾಹಿತ ಹುಡುಗಿಯರು ತಮ್ಮ ಜೀವನದಲ್ಲಿ ಪರಿಪೂರ್ಣ ಶಾಂತಿನೆಲೆಸಲು ಮಾ ಕಾತ್ಯಾಯನಿ ಪೂಜೆಯನ್ನು ಮಾಡಲು ಸಲಹೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ ಮಾ ಕಾತ್ಯಾಯನಿ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಒಬ್ಬರ ಯಶಸ್ಸಿನ ಹಾದಿಯಲ್ಲಿ ನಿಂತಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾಳೆ ಮತ್ತು ಭಕ್ತರಿಗೆ ಅದೃಷ್ಟವನ್ನು ನೀಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.


ಕಾತ್ಯಾಯನಿಯ ಕಥೆ

ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಹುಟ್ಟಿದಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯನಿ ದೇವಿಯು ಮಹಿಷಾಶುರಾ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು. ಎಡಗೈಯಲ್ಲಿ ಖಡ್ಗ ಮತ್ತು ಕಮಲದ ಹೂವನ್ನು ಹಿಡಿದು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಹಿಡಿದುಕೊಂಡು ಸಿಂಹದ ಮೇಲೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಮಾ ಕಾತ್ಯಾಯನಿಯನ್ನು ದುಷ್ಟ ನಾಶಕೆ ಎಂದು ಹೇಳಲಾಗುತ್ತದೆ.


ಹಿಂದೂ ಧರ್ಮದಲ್ಲಿ, ಮಹಿಷಾಶುರ ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರೂಪ ಹೊಂದಿದ ರಾಕ್ಷಸನಾಗಿದ್ದನು. ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ದುಷ್ಟ ರೀತಿಯಲ್ಲಿ ಬಳಸಿದನು. ಅವನ ತಿರುಚಿದ ಮಾರ್ಗದಿಂದ ಕೋಪಗೊಂಡ ಎಲ್ಲಾ ದೇವರುಗಳು ಮಾ ಕಾತ್ಯಾಯನಿಯನ್ನು ರಚಿಸಲು ತಮ್ಮ ಶಕ್ತಿಯನ್ನು ಒಗ್ಗೂಡಿಸಿದರು.


ಪುರಾಣದ ಪ್ರಕಾರ, ದೇವತೆಗಳು ರಾಕ್ಷಸ ಮಹಿಷಾಸುರ ಮತ್ತು ಅವನ ದುಷ್ಕೃತ್ಯಗಳ ಮೇಲೆ ಕೋಪಗೊಂಡು ತಮ್ಮ ಸಂಯೋಜಿತ ಶಕ್ತಿಯಿಂದ ಮಾ ಕಾತ್ಯಾಯನಿಯನ್ನು ರಚಿಸಲು ಒಟ್ಟಾಗಿ ಸೇರಿಕೊಂಡರು. ಅವರು ತಮ್ಮ ಕೋಪವನ್ನು ಶಕ್ತಿಯ ಕಿರಣಗಳಾಗಿ ಗೋಚರಿಸುವಂತೆ ಮಾಡಿದರು. ಅದು ಕಾತ್ಯಾಯನ ಋಷಿಯ ಆಶ್ರಮದಲ್ಲಿ ಗಟ್ಟಿಯಾಗುತ್ತದೆ. ನಂತರ ಅದಕ್ಕೆ ಅವರಿಂದ ಸರಿಯಾದ ರೂಪವನ್ನು ನೀಡಲಾಯಿತು. ಆದ್ದರಿಂದ ಮಾ ದುರ್ಗೆಯ ಅವತಾರವನ್ನು ಕಾತ್ಯಾಯನಿ ಅಥವಾ ಕಾತ್ಯಾಯನನ ಮಗಳು ಎಂದೂ ಕರೆಯುತ್ತಾರೆ.


ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚರಕವನ್ನು, ಅಂಗಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಗುಡುಗು, ಬ್ರಹ್ಮದೇವನು ನೀರಿನ ಪಾತ್ರೆಯೊಂದಿಗೆ ರುದ್ರಾಕ್ಷ ಇತ್ಯಾದಿಗಳನ್ನು ನೀಡಲಾಯಿತು. ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧ ನಡೆದು ರಾಕ್ಷಸನನ್ನು ಕಾತ್ಯಾಯನಿ ಸಂಹರಿಸಿದಳು. ಇದನ್ನು ‘ಕೆಟ್ಟದ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ.


ಕಾತ್ಯಾಯನಿ ಮಂತ್ರಗಳು

ಓಂ ದೇವೀ ಕಾತ್ಯಾಯನ್ಯೈ ನಮಃ

ಯಾ ದೇವೀ ಸರ್ವಭೂತೇಷು ಮಾ ಕಾತ್ಯಾಯನೀ ರೂಪೇಣ ಸಂಸ್ಥಿತಾ । ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಚಂದ್ರ ಹಾಸೋಜ್ಜ ವಾಲಕಾರ, ಶಾರ್ದೂಲವರ ವಾಹನ, ಕಾತ್ಯಯನಿ ಶುಭಂ ದದ್ಯ, ದೇವಿ ದಾನವ ಘಾತಿನಿ

ಮಾ ಕಾತ್ಯಾಯನಿ ಭೋಗ್

ಮಾ ಕಾತ್ಯಾಯನಿಗೆ ಜೇನುತುಪ್ಪವನ್ನು ಅರ್ಪಿಸುವು ಒಳ್ಳೆಯದು ಎಂದು ನಂಬಲಾಗಿದೆ.


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp




Post a Comment

0 Comments